ಕರ್ನಾಟಕ ಮತ್ತು ತಮಿಳುನಾಡಿನ ನಡುವಿನ ಮೊದಲ ರಣಜಿ ಪಂದ್ಯದಲ್ಲಿ ಕರ್ನಾಟಕ ಗೆದ್ದು ಬೀಗಿದೆ. ತೀವ್ರ ಕುತೂಹಲ ಕೆರಳಿಸಿದ್ದ ಪಂದ್ಯಾಟದಲ್ಲಿ ಗೆಲುವಿನ ಅವಕಾಶ ಎರಡೂ ತಂಡಗಳಿಗೂ ಇತ್ತು. ಕಡೇ ಹಂತದಲ್ಲಿ ಮೇಲುಗೈ ಸಾಧಿಸಿದ ಕರ್ನಾಟಕ ರೋಚಕವಾಗಿ ಗೆದ್ದು ಬೀಗಿದೆ. ಆದರೆ ಪಂದ್ಯದ ಬಳಿಕ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿರುವ ಆಟಗಾರರ ಮಧ್ಯೆ ನಡೆದ ಗಂಭೀರ ಮಾತಿನ ಚಕಮಕಿ ವಿವಾದದ ಸ್ವರೂಪ ಪಡೆದುಕೊಂಡಿದೆ.